ಸಾಹಿತ್ಯ ಸಮ್ಮೇಳನ-೬0 : ಮೈಸೂರು
ನವೆಂಬರ್ ೧೯೯0

೬0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕೆ.ಎಸ್. ನರಸಿಂಹಸ್ವಾಮಿ ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಸುಬ್ಬರಾಯ-ನಾಗಮ್ಮ ದಂಪತಿಗಳಿಗೆ ೨೬-೧-೧೯೧೫ರಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು […]

ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ
ಫೆಬ್ರವರಿ ೧೯೯0

೫೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಆರ್.ಸಿ. ಹಿರೇಮಠ  ಕನ್ನಡದ ಭಾಷಾವಿಜ್ಞಾನಿ, ವಚನಶಾಸ್ತ್ರಕೋವಿದ ಸಂಶೋಧಕ ಆಗಿದ್ದ ಆರ್.ಸಿ. ಹಿರೇಮಠರು ರೋಣ ತಾಲ್ಲೂಕಿನ ಕುರುಡಗಿಯಲ್ಲಿ ಚಂದ್ರಯ್ಯ-ವೀರಮ್ಮ ದಂಪತಿಗಳಿಗೆ ೧೫-೧-೧೯೨0ರಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾಂಗಳಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ೧೯೪0ರಲ್ಲಿ ಕನ್ನಡ ಎಂ.ಎ.ಪದವಿ ಗಳಿಸಿದರು. ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ […]

ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ
ನವೆಂಬರ್ ೧೯೮೭

೫೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಸಿದ್ದಯ್ಯ ಪುರಾಣಿಕ  ಪ್ರಸಿದ್ಧ ಕವಿ, ಆಡಳಿತಗಾರ, ಆಧುನಿಕ ವಚನಕಾರ ಸಾಹಿತಿ ಸಿದ್ದಯ್ಯ ಪುರಾಣಿಕರು ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲ್ಲೂಕಿನ ದ್ಯಾಂಪುರದಲ್ಲಿ ಕಲ್ಲಿನಾಥಶಾಸ್ತ್ರಿ-ದಾನಮ್ಮ ದಂಪತಿಗಳಿಗೆ ೧೮-೮-೧೯೧೮ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ದ್ಯಾಂಪುರ, ಕುಕ್ಕನೂರುಗಳಲ್ಲಿ ಮುಗಿಸಿ, ಇಂಟರ್‍ಮೀಡಿಯೇಟ್‍ವರೆಗಿನ ಶಿಕ್ಷಣವನ್ನು ಗುಲ್ಬರ್ಗದಲ್ಲಿ ಪೂರೈಸಿದರು. ಬಿ.ಎ., ಎಲ್.ಎಲ್.ಬಿ ಪದವಿಗಳನ್ನು ಉಸ್ಮಾನಿಯಾ […]

ಸಾಹಿತ್ಯ ಸಮ್ಮೇಳನ-೫೭ : ಬೀದರ್
ಏಪ್ರಿಲ್ ೧೯೮೫

೫೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಹಾ.ಮಾ. ನಾಯಕ ಅಂಕಣ ಸಾಹಿತ್ಯದಿಂದ ಕನ್ನಡದಲ್ಲಿ ಪ್ರಸಿದ್ಧರಾದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಶ್ರೀನಿವಾಸನಾಯಕ-ರುಕ್ಮಿಣಿಯಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ ೧೨-೧೧-೧೯೩೧ರಂದು ಜನಿಸಿದರು. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ […]

ಸಾಹಿತ್ಯ ಸಮ್ಮೇಳನ-೫೬ : ಕೈವಾರ
ಮಾರ್ಚ್ ೧೯೮೪

೫೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎ.ಎನ್. ಮೂರ್ತಿರಾವ್ ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್. ಮೂರ್ತಿರಾವ್ ಅವರು ಎಂ.ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರರಾಗಿ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್) ೧೮-೬-೧೯00ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನ್ಮ ತಳೆದರು. ಬಾಲ್ಯದ ದಿನಗಳನ್ನು ಮೇಲುಕೋಟೆ, […]

ಸಾಹಿತ್ಯ ಸಮ್ಮೇಳನ-೫೫ : ಶಿರಸಿ
ಡಿಸೆಂಬರ್ ೧೯೮

೫೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಇವರು ಗೊರೂರು ಗ್ರಾಮದಲ್ಲಿ ೪-೭-೧೯0೪ರಲ್ಲಿ ಶ್ರೀನಿವಾಸ ಅಯ್ಯಂಗಾರ್-ಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದರು. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ […]

ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ
ನವೆಂಬರ್ ೧೯೮೧

೫೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಶಂ.ಬಾ. ಜೋಶಿ ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಬಾಳದೀಕ್ಷಿತ ಜೋಶಿ ಮತ್ತು ಉಮಾಬಾಯಿ ಅವರ ಮಗನಾಗಿ ೪-೧-೧೮೯೬ರಲ್ಲಿ ಗುರ್ಲಹೊಸೂರಿನಲ್ಲಿ ಜನಿಸಿದರು. ಜೋಶಿ ಅವರ ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. ೧೯೧೬ರಲ್ಲಿ […]

ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರು
ಮಾರ್ಚ್ ೧೯೮೧

೫೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪು.ತಿ ನರಸಿಂಹಾಚಾರ್ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಪುತಿನ ಅವರು (ಪುರೋಹಿತ ತಿರುನಾರಾಯಣ ನರಸಿಂಹಾಚಾರ್) ತಿರುನಾರಾಯಣ ಅಯ್ಯಂಗಾರ್-ಶಾಂತಮ್ಮ ದಂಪತಿಗಳ ಪುತ್ರರಾಗಿ ೧೭-೩-೧೯0೫ರಲ್ಲಿ ಮೇಲುಕೋಟೆಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ […]

ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿ
ಫೆಬ್ರವರಿ ೧೯೮0

೫೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಬಸವರಾಜ ಕಟ್ಟೀಮನಿ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದ ಬಸವರಾಜ ಕಟ್ಟೀಮನಿಯವರು ಶಿರೂರಿನ ಅಯ್ಯಣ್ಣ-ಮಲಾಮರಡಿಯ ಬಾಳವ್ವ ದಂಪತಿಗಳ ಪುತ್ರರಾಗಿ ೫-೧0-೧೯೧೯ ರಲ್ಲಿ ಜನಿಸಿದರು. ಗೋಕಾಕ, ಸುಲದಾಳ, ಚಿಕ್ಕೋಡಿ, ನಿಪ್ಪಾಣಿ, ಬೆಳಗಾವಿ, ಪುಣೆ ಮುಂತಾದ ಕಡೆಗಳಲ್ಲಿ ಕಟ್ಟೀಮನಿ ಅವರ ಶಾಲಾ ಶಿಕ್ಷಣ ನಡೆಯಿತು. ಅನಂತರ ವಿದ್ಯಾಭ್ಯಾಸ ಮುಂದುವರಿಸಲಾಗದೆ ಪತ್ರಿಕಾರಂಗ ಪ್ರವೇಶಿಸಿದರು. […]

ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ
ಮಾರ್ಚ್ ೧೯೭೯

೫೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಂ. ಗೋಪಾಲಕೃಷ್ಣ ಅಡಿಗ ಪ್ರಸಿದ್ಧ ನವ್ಯಕಾವ್ಯದ ಕವಿಗಳೂ, ವಿಮರ್ಶಕರೂ ಆಗಿದ್ದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರು ರಾಮಪ್ಪ ಮತ್ತು ಗೌರಮ್ಮನವರ ಪುತ್ರರಾಗಿ ೧೮-೨-೧೯೧೮ರಲ್ಲಿ ಜನಿಸಿದರು. ಶಾಲಾ ಶಿಕ್ಷಣ ಬೈಂದೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಆಯಿತು. ೧೯೪೨ರಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಗಳಿಸಿದರು. ಚಿತ್ರದುರ್ಗ, ದಾವಣಗೆರೆ, […]

1 2