ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರಿಗೆ ಸೋದರಿ ವಿಯೋಗ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರಿಗೆ ಸೋದರಿ ವಿಯೋಗ

WhatsApp Image 2024-07-26 at 3.19.57 PM

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಶಿಯವರ ಹಿರಿಯಕ್ಕರಾದ ರೇಣುಕಾ ಕುರ್ತಕೋಟಿಯವರು, ತಮ್ಮ 83ನೇ ವಯಸ್ಸಿನಲ್ಲಿ, ವಯೋಸಹಜ ಕಾರಣಗಳಿಂದ ಇಂದು (26 ಜುಲೈ) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಜೋಶಿ ಕುಟುಂಬವು ತನ್ನ ಹಿರಿಯರಾದ ತಂದೆಯವರನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಕಳೆದು ಕೊಂಡಾಗ. ಬಾಳ ದೋಣಿಯ ಹುಟ್ಟನ್ನು ಹಿಡಿದು ಸಮರ್ಥವಾಗಿ ಸಂಸಾರವನ್ನು ದಡ ಸೇರಿಸಿದ ದಿಟ್ಟತನ ಅವರದು. ವಿವಾಹ ನಂತರ ಪತಿಯ ಗೃಹದಲ್ಲಿಯೂ ದಕ್ಷತೆಯಿಂದ ಸಂಸಾರವನ್ನು ನಡೆಸಿ ಆದರ್ಶ ಗೃಹಿಣಿ ಎನ್ನಿಸಿ ಕೊಂಡು ಇಡೀ ಸಮೂಹಕ್ಕೆ ಮಾದರಿ ಎನ್ನಿಸಿ ಕೊಂಡಿದ್ದರು.

ರೇಣುಕಾ ಕುರ್ತಕೋಟಿಯವರು ಕೆನರಾ ಬ್ಯಾಂಕನಲ್ಲಿ ವಲಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದರು. ಪತಿ ಲಿಂಗರಾಜ್ ಕುರ್ತಕೋಟಿ, 4 ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ ಸೇರಿದಂತೆ ಮೂವರು ತಮ್ಮಂದಿರು, ತಂಗಿ ಜೊತೆಗೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)