ಕನ್ನಡ ಕಸ್ತೂರಿ

ಕನ್ನಡದ ಬಾವುಟ

ಬಿ. ಎಂ. ಶ್ರೀ
ಏರಿಸಿ, ಹಾರಿಸಿ, ಕನ್ನಡದ ಬಾವುಟ ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಬಾಳ್ ಕನ್ನಡ ತಾಯ್ ಏಳ್ ಕನ್ನಡ ತಾಯ್ ಆಳ್ ಕನ್ನಡ ತಾಯ್ ಕನ್ನಡಿಗರೊಡತಿ ಓ ರಾಜೇಶ್ವರಿ ರಾಜೇಶ್ವರೀs.... ಕನ್ನಡದ ಬಾವುಟವ ಹಿಡಿಯದವರಾರು ಕನ್ನಡದ ಬಾವುಟಕೆ ಮಡಿಯದವರಾರು ನಮ್ಮ ಈ ಬಾವುಟಕೆ ಮಿಡಿಯದವರಾರು ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ ಉಗಿಸಿರೋ ಹೇಡಿ ತಾನೊಬ್ಬ ಮನೆಗುಳಿದರೇs ಬಾಳ್ ... ಪೂರ್ಣಕವಿತೆಗೆ ದಾರಿ

ಕನ್ನಡಕೆ ಹೋರಾಡು ಕನ್ನಡದ ಕಂದಾ

ಸಾಹಿತ್ಯ: ಕುವೆಂಪು ಕನ್ನಡಕೆ ಹೋರಾಡು ಕನ್ನಡದ ಕಂದಾ; ಕನ್ನಡವ ಕಾಪಾಡು ನನ್ನ ಆನಂದಾ! ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ; ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ! ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ; ತಾಯಿಯಪ್ಪುಗೆಯಂತೆ ಬಲುಸೊಗಸು ಮೆಯ್ಗೆ; ಗುರುವಿನೊಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ; ತಾಯ್ನುಡಿಗೆ ದುಡಿದು ಮಡಿ, ಇಹಪರಗಳೇಳ್ಗೆ! ರನ್ನ ಪಂಪರ ನಚ್ಚು ಕನ್ನಡದ ಸೊಲ್ಲು; ಬಸವದೇವನ ಮೆಚ್ಚು, ಹರಿಹರನ ... ಪೂರ್ಣಕವಿತೆಗೆ ದಾರಿ

ಎಲ್ಲಾದರು ಇರು; ಎಂತಾದರು ಇರು;

ಕುವೆಂಪು
ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ  ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ನೀ ಮೆಟ್ಟುವ ನೆಲ – ಅದೆ ಕರ್ನಾಟಕ; ನೀನೇರುವ ಮಲೆ – ಸಹ್ಯಾದ್ರಿ. ನೀ ಮುಟ್ಟುವ ಮರ – ಶ್ರೀಗಂಧದ ಮರ; ನೀ ಕುಡಿಯುವ ನೀರ್ – ಕಾವೇರಿ. ಪಂಪನನೋದುವ ನಿನ್ನಾ ನಾಲಗೆ ಕನ್ನಡವೇ ... ಪೂರ್ಣಕವಿತೆಗೆ ದಾರಿ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ದ. ರಾ. ಬೇಂದ್ರೆ
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ ಒಂದೇ ಜಗವು ಮನವು ಕನ್ನಡಿಗರು ಎಂದೆ ಕುಲವೊಂದೇ ಛಲವೊಂದೇ ನೀತಿಯ ನೆಲೆಯೊಂದೇ ಹೀಗೆನ್ನದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೆ ಕನ್ನಡವೆಂದು ಒಪ್ಪದು ... ಪೂರ್ಣಕವಿತೆಗೆ ದಾರಿ

ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ

ಚನ್ನವೀರ ಕಣವಿ
ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ಗಂಗ, ಕದಂಬ, ರಾಷ್ಟ್ರಕೂಟ ಬಲ ಚಾಲುಕ್ಯ, ಹೊಯ್ಸಳ, ಬಲ್ಲಾಳ ಹಕ್ಕ, ಬುಕ್ಕ, ಪುಲಕೇಶಿ, ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ. ಆಚಾರ್ಯತ್ರಯ ಮತಸಂಸ್ಥಾಪನ ಬಸವಾಲ್ಲಮ ಅನುಭಾವ ನಿಕೇತನ ಶರಣ, ದಾಸ, ತೀರ್ಥಂಕರ ನಡೆ-ನುಡಿ ವಿಶ್ವತಮೋಹಾರಿ. ಪಂಪ, ... ಪೂರ್ಣಕವಿತೆಗೆ ದಾರಿ

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ |

ಸಾಲಿ ರಾಮಚಂದ್ರರಾವ್
ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ | ಕನ್ನಡದ ನೆಲದ ನೀರ್ವೊಲೆನಗೆ ಜೀವನದಿ ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ ಕನಡವೆ ದೈವಮೈ ಕನ್ನಡ ಶಬ್ದಮೆನಗೋಂಕಾರಮೀಯೆನ್ನ | ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ ಮಿನ್ನಾವುದೈಪೆರೆತು ಕನ್ನಡದ ಸೇವೆಯಿಂದಧಿಕಮೀಜಗಧೊಳೆನಗೆ? ಸಾಹಿತ್ಯ: ಸಾಲಿ ರಾಮಚಂದ್ರರಾವ್ (ಕ್ರಿ.ಶ. ೧೮೮೮ – ೧೯೭೮) ... ಪೂರ್ಣಕವಿತೆಗೆ ದಾರಿ

ಕನ್ನಡ ಡಿಂಡಿಮ

ಕುವೆಂಪು
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ! ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ ಮೂಡಲಿ ಮಂಗಳ ಮತಿಮತಿಯಲ್ಲಿ: ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ! ಬಾರಿಸು ಕನ್ನಡ ಡಿಂಡಿಮವ, ಓ ... ಪೂರ್ಣಕವಿತೆಗೆ ದಾರಿ

ಏನು ಚೆಲುವಿನ ನಾಡು

ಬಿ ಎಂ. ಶ್ರೀ
ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯನೋಡುತ್ತ ತಾಯಡಿಯ ಹುಡಿಯ ತಲೆಗಾನುತ್ತ, ಹರಕೆಯ ಪವಿತ್ರ ಯಾತ್ರೆಯಲಿ ಏನು ಚೆಲುವಿನ ನಾಡು! ಚೆಲುವು ಚೆಲ್ಲುವ ನಾಡು! ಕನ್ನಡದ ನಾಡು! ಏನು ಚಿನ್ನದ ನಾಡು! ನನ್ನೊಲುಮೆಯಾ ನಾಡು! ನಮ್ಮಿನಿಯ ನಾಡು! ಕಾವೇರಿಯಿಂದ ಗೋದಾವರಿಯವರೆಗೆ ಚಾಚಿರುವ ನಾಡು! ಬಳಸಿದೆನು, ಸುತ್ತಿದೆನು, ಕಣ್ದಣಿಯೆ ನೋಡಿದೆನು, ಕುಣಿದು ಹಾಡಿದೆನು. ಸಾಹಿತ್ಯ: ಬಿ ಎಂ ... ಪೂರ್ಣಕವಿತೆಗೆ ದಾರಿ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ಮಂಜೇಶ್ವರ ಗೋವಿಂದ ಪೈ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು. ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೋ ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೋ ತೆನೆಕೆನೆಯ ಗಾಳಿಯೋ ಖಗಮೃಗೋರಗಾಳಿಯೋ ನದಿ ... ಪೂರ್ಣಕವಿತೆಗೆ ದಾರಿ