ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)

ಸಮ್ಮೇಳನಾಧ್ಯಕ್ಷರು : ಸಿದ್ದಲಿಂಗಯ್ಯ  ಕವಿ, ಕನ್ನಡ ಪ್ರಾಧ್ಯಾಪಕ ಡಾ. ಸಿದ್ಧಲಿಂಗಯ್ಯನವರು ಹೋರಾಟಗಾರರೂ ಆಗಿದ್ದಾರೆ. ಇವರು ಮಾಗಡಿಯಲ್ಲಿ ವೆಂಕಮ್ಮ-ದೇವಯ್ಯ ದಂಪತಿಗಳಿಗೆ ೩-೨-೧೯೫೪ ರಲ್ಲಿ ಜನಿಸಿದರು. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. […]

ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿ
ಜನವರಿ ೨0೧೪

೮0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು     ನಾ. ಡಿಸೋಜ ಪರಿಸರದ ನಾಶವಾದರೆ ಮಾನವ ಜನಾಂಗದ ವಿನಾಶ, ಪರಿಸರವನ್ನು ರಕ್ಷಿಸುವುದರಿಂದ ಮಾನವನ ಬಾಳು ಸಂತೋಷವಾಗಲು ಶಕ್ಯ ಎಂಬ ಧ್ಯೇಯದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿರುವ ನಾ. ಡಿಸೋಜ ಅವರು ಎಫ್.ಪಿ. ಡಿಸೋಜ-ರೂಪಿನಾ ಬಾಯಿ ದಂಪತಿಗಳ ಪುತ್ರರಾಗಿ ೬-೬-೧೯೩೭ರಲ್ಲಿ ಜನಿಸಿದರು. ಬಾಲ್ಯದಿಂದಲೂ ಸಾಹಿತ್ಯಿಕ ವಾತಾವರಣದಲ್ಲಿ […]

ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ
ಫೆಬ್ರವರಿ ೨0೧೩

೭೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು       ಕೋ. ಚೆನ್ನಬಸಪ್ಪ ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ಇವರು ಬಸಮ್ಮ-ವೀರಣ್ಣ ದಂಪತಿಗಳ ಸುಪುತ್ರರಾಗಿ ೨೭-೨-೧೯೨೨ರಂದು ಜನಿಸಿದರು. ತವರೂರಿನಲ್ಲಿ ಶಾಲಾವಿದ್ಯಾಭ್ಯಾಸ ಮುಗಿಸಿ ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. […]

ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿ
ಡಿಸೆಂಬರ್ ೨0೧೧

೭೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು       ಸಿ.ಪಿ. ಕೃಷ್ಣಕುಮಾರ್ ಸಿ.ಪಿ.ಕೆ. ಎಂಬ ಮೂರಕ್ಷಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ  ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಅವರು ೮-೪-೧೯೩೯ರಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಸಾಲಿಗ್ರಾಮದಲ್ಲಿ ಪೂರೈಸಿ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಮುಂದುವರಿಸಿ ೧೯೬೧ರಲ್ಲಿ ಎಂ.ಎ. ಪದವಿ […]

ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು
ಫೆಬ್ರವರಿ ೨0೧೧

೭೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪ್ರೊ. ಜಿ. ವೆಂಕಟಸುಬ್ಬಯ್ಯ ಶತಾಯುಷಿಯಾದ ಕನ್ನಡ ವಿದ್ವಾಂಸ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣದ ಗಂಜಾಂಗ್ರಾಮಕ್ಕೆ ಸೇರಿದವರು. ಶಿಕ್ಷಕರೂ ವಿದ್ವಾಂಸರೂ ಆದ ಗಂಜಾಂ ತಿಮ್ಮಣ್ಣಯ್ಯ ಮತ್ತು ತಾಯಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠಪುತ್ರರಾಗಿ ೨೩-೮-೧೯೧೩ರಂದು ಜನಿಸಿದರು. ೧೯೨೭ ರಿಂದ ೧೯೩0ರ ವರೆಗೆ ಪ್ರೌಢಶಾಲೆ ಶಿಕ್ಷಣವನ್ನು […]

ಸಾಹಿತ್ಯ ಸಮ್ಮೇಳನ-೭೬ : ಗದಗ
ಫೆಬ್ರವರಿ ೨0೧0

೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಗೀತಾ ನಾಗಭೂಷಣ ಕನ್ನಡದ ಹೆಸರಾಂತ ಲೇಖಕಿಯರಲ್ಲಿ ಒಬ್ಬರಾದ ಶ್ರೀಮತಿ ಗೀತಾ ನಾಗಭೂಷಣ ಅವರು ಗುಲ್ಬರ್ಗದ ಬಡ ಕುಟುಂಬದಲ್ಲಿ ಶಾಂತಪ್ಪ-ಶರಣಮ್ಮ ದಂಪತಿಗಳಿಗೆ ಮಗಳಾಗಿ ೨೫-೩-೧೯೪೨ರಲ್ಲಿ ಜನಿಸಿದರು. ಇವರು ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, […]

ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ
ಜನವರಿ, ೨00೯

೭೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಲ್. ಬಸವರಾಜು ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ ೭-೧0-೧೯೧೯ರಂದು ಲಿಂಗಪ್ಪ-ಈರಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು […]

ಸಾಹಿತ್ಯ ಸಮ್ಮೇಳನ-೭೪ : ಉಡುಪಿ
ಡಿಸೆಂಬರ್ ೨00೭

೭೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಲ್.ಎಸ್. ಶೇಷಗಿರಿರಾವ್ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಬುದ್ಧ ವಿಮರ್ಶಕರೆನಿಸಿರುವ ಎಲ್.ಎಸ್. ಶೇಷಗಿರಿರಾಯರು ಸ್ವಾಮಿರಾವ್-ಕಮಲಾಬಾಯಿ ದಂಪತಿಗಳ ಸುಪುತ್ರರಾಗಿ ೧೬-೨-೧೯೨೫ರಲ್ಲಿ ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ […]

ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ
ಡಿಸೆಂಬರ್ ೨00೬

೭೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕೆ.ಎಸ್. ನಿಸಾರ್ ಅಹಮದ್ ನಿತ್ಯೋತ್ಸವ ಕವಿಯಾಗಿ ಪ್ರಸಿದ್ಧರಾದ ಕೆ.ಎಸ್. ನಿಸಾರ್ ಅಹಮದ್ ಅವರು ಮೈಸೂರು ಸರಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ ದಂಪತಿಗಳ ಪುತ್ರರು. ಇವರು ಜನಿಸಿದ್ದು ೫-೨-೧೯೩೬ರಂದು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ […]